ನಗೆ ಡಂಗುರ – ೧೬೪

ಶ್ರೀಮಂತನೊಬ್ಬ ಮರಣಶಯ್ಯೆಯಲ್ಲಿದ್ದಾಗ ಮೃತ್ಯು ಪತ್ರಬರೆಯಲು ತನ್ನ ವಕೀಲರಿಗೆ ಹೇಳಿ ಕಳುಹಿಸಿದ. ವಕೀಲರು ಬಂದು ಪತ್ರಕ್ಕೆ ಸಿದ್ಧತೆ ನಡೆಸಿದರು.
ಶ್ರೀಮಂತ: “ವಕೀಲರೇ, ಬೆಂಗಳೂರಿನಲ್ಲಿರುವ ನನ್ನ ಮನೆಯನ್ನು ನನ್ನ ಹಿರಿಯ ಮಗನಿಗೆ ಬರೆಯಿರಿ.”
ವಕೀಲ: “ಬೇಡ- ಆ ಮನೆಯನ್ನು ನಿಮ್ಮ ಪತ್ನಿ ಹೆಸರಿಗೆ ಮಾಡೋಣ.”
ಶ್ರೀಮಂತ: ಆಗಲಿ ಎಂದರು. ನಂತರ “ನನ್ನ ಕಾರನ್ನು ದೊಡ್ಡ ಮಗನಿಗೆ ಬರೆಯಿರಿ.”
ವಕೀಲ: “ಬೇಡ- ಆ ಕಾರನ್ನು ಕಿರಿ ಮಗನಿಗೆ ಮಾಡೋಣ.”
ಶ್ರೀಮಂತ: “ಆಯಿತು. ನನ್ನ ಒಂದು ಲಕ್ಷ ರೂ ಷೇರುಗಳನ್ನು ನನ್ನ ತಮ್ಮನ ಹೆಸರಿಗೆ ಬರೆಯಿರಿ.”
ವಕೀಲ: “ಸಾಧ್ಯವಿಲ್ಲ. ಆ ಶೇರುಗಳನ್ನು ತಮ್ಮದೊಡ್ಡ ಮಗನಿಗೆ ಬರೆಯೋಣ.”
ಶ್ರೀಮಂತ: “ಒಂದು ಮಾತು ಕೇಳಲೆ?”
ವಕೀಲ: “ಕೇಳಿ ಯಾರು ಬೇಡ ಆಂದಾರು:”
ಶ್ರೀಮಂತ: “ಸಾಯುತ್ತಿರುವುದು ನಾನೋ ಆಥವಾ ತಾವೋ?”
ವಕೀಲರು ಬಾಯಿ ಮುಚ್ಚಿದರು.
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯಲು ಬಯಕೆ
Next post ಲಿಂಗಮ್ಮನ ವಚನಗಳು – ೪೪

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys